ಬಿಡದಿ ಟೌನ್ಶಿಪ್ ಭೂಸ್ವಾಧೀನ ವಿವಾದ
ಬೆಂಗಳೂರಿನ ಸುತ್ತ ಮುತ್ತಲಿನ ಬೆಳವಣಿಗೆಯ ವೇಗಕ್ಕೆ ಅನುಕೂಲವಾಗುವ ಸಣ್ಣ ಸಣ್ಣ ನಗರಗಳನ್ನು ನಿರ್ಮಿಸುವ ಸರ್ಕಾರದ ಮಹತ್ವದ ಯೋಜನೆ ಈಗ ದೊಡ್ಡ ರಾಜಕೀಯ ಮತ್ತು ಸಾಮಾಜಿಕ ಗೊಂದಲಕ್ಕೆ ಕಾರಣವಾಗಿದೆ. ರಾಮನಗರ ಜಿಲ್ಲೆಯ ಬಿಡದಿಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸುಮಾರು 9,000ಕ್ಕೂ ಹೆಚ್ಚು ಎಕ್ಕರೆ ಜಮೀನನ್ನು ವಶಪಡಿಸಿಕೊಂಡಿದೆ
ಸ್ಮಾರ್ಟ್ ಸಿಟಿ ಕಟ್ಟಡಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಇಂದು ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೃಷಿ ಭೂಮಿ ಉಳಿಸಿಕೊಳ್ಳಲು ರೈತರು ಹಾಗೂ ಸರ್ಕಾರದ ವಿರುದ್ಧ ರಾಜಕೀಯ ಅಸ್ತ್ರ ಪ್ರಯೋಗಿಸಲು ವಿರೋಧ ಪಕ್ಷಗಳು ಸಜ್ಜಾಗುತ್ತಿರುವುದರಿಂದ ಬಿಡದಿ ವಿವಾದ ಈಗ ಇಡೀ ರಾಜ್ಯದ ಗಮನ ಸೆಳೆದಿದೆ.
ಇವತ್ತಿನ ಪ್ರಮುಖ ಬೆಳವಣಿಗೆ ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ
ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷದ ನಾಯಕರು ಸೇರಿ ಹಾಗೂ ಬಿಡದಿ ಪ್ರದೇಶದ ನೂರಾರು ರೈತರು ಒಟ್ಟಾಗಿ ಸೇರಿ ಬೃಹತ್ ಪ್ರತಿಭಟನಾ ಸತ್ಯಾಗ್ರಹ ಮಾಡಿದರು.
- ಬಿ .ಎಸ್. ಯಡಿಯೂರಪ್ಪ ಅವರ ಆಗಮನ : ಸದ್ಯದ ದಿನಗಳಲ್ಲಿ ಸಾರ್ವಜನಿಕ ಹೋರಾಟಗಳಿಂದ ದೂರ ಉಳಿದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಸ್ವಹಿಚ್ಚೆಯಿಂದ ಹೋರಾಟದಲ್ಲಿ ಪಾಲ್ಗೊಂಡಿದ್ದು ಅತ್ಯುನ್ನತ ಕಾರ್ಯವಾಗಿತ್ತು. ಅವರು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿ ರೈತರ ಒಪ್ಪಿಗೆಯಿಲ್ಲದೆ ಒಂದು ಇಂಚು ಭೂಮಿಯನ್ನೂ ಮುಟ್ಟಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
- ಬಿಡದಿಯಿಂದ ಬೆಂಗಳೂರಿಗೆ ಪಾದಯಾತ್ರೆ ಘೋಷಣೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರತಿಭಟನಾ ವೇದಿಕೆಯಲ್ಲಿ ಪ್ರಮುಖ ಘೋಷಣೆಯೊಂದನ್ನು ಮಾಡಿದರು. ಸರ್ಕಾರದ ಹೆದರಿಕೆಯನ್ನು ಖಂಡಿಸಿ ಮತ್ತು ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬಿಡಬೇಕೆಂದು ಒತ್ತಾಯಿಸಿ ಶೀಘ್ರದಲ್ಲೇ ಬಿಡದಿಯಿಂದ ಬೆಂಗಳೂರಿಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
- ಸುಳ್ಳು ಮೊಕದ್ದಮೆಗಳ ಆರೋಪ: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಹೋರಾಟ ಮಾಡುತ್ತಿರುವ ಬಡ ರೈತರ ಮೇಲೆ ಸರ್ಕಾರ ಸುಳ್ಳು ಪೊಲೀಸ್ ಕೇಸ್ಗಳನ್ನು ದಾಖಲಿಸಿ ಜೈಲಿಗೆ ಕಳುಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
- ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಜಾರಿ: ಆರ್ಥಿಕ ಇತಿಹಾಸದಲ್ಲಿ ಹೊಸ ಆರಂಭ!
ಬಿಡದಿ ಟೌನ್ಶಿಪ್ ಯೋಜನೆಯ ಹಿನ್ನೆಲೆ ಮತ್ತು ಇತಿಹಾಸ

ನಿಮಗೆ ನಂಬದೆ ಸಾಧ್ಯವಾಗದೆ ಇರಬಹುದು ಬಿಡದಿಯಲ್ಲಿ ಈ ರೀತಿಯ ಬೃಹತ್ ಸ್ಯಾಟಲೈಟ್ ಟೌನ್ಶಿಪ್ ನಿರ್ಮಿಸುವ ಆಲೋಚನೆ ಇಂದಿನದಲ್ಲ. ಇದರ ಇತಿಹಾಸ ಎರಡು ದಶಕಗಳಷ್ಟು ಹಳೆಯದು.
- 2006-07 ರ ಮೊದಲ ಪ್ರಯತ್ನ: ಬಿಡದಿ ಸುತ್ತಲಿನ ಜಾಗತಿಕ ಮಟ್ಟದ ಸಣ್ಣ ಸಣ್ಣ ನಗರಗಳನ್ನು ನಿರ್ಮಿಸುವ ಮೊದಲ ಪ್ರಸ್ತಾವನೆ ಬಂದಿದ್ದು 2006-07 ರ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಕಾಲದಲ್ಲಿ. ಆಗ ಬೆಂಗಳೂರು ಮಹಾನಗರ ಅಭಿವೃದ್ಧಿ ಪ್ರಾಧಿಕಾರ ಮೂಲಕ ಜಾಗತಿಕ ಟೆಂಡರ್ ಕರೆಯಲಾಗಿತ್ತು. ದೊಡ್ಡ ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಯೊಂದಕ್ಕೆ ಇದರ ಜವಾಬ್ದಾರಿಯನ್ನೂ ನೀಡಲಾಗಿತ್ತು. ಆದರೆ ಭೂಸ್ವಾಧೀನಕ್ಕೆ ಎದುರಾದ ಕಾನೂನು ತೊಡಕುಗಳು ರೈತರ ತೀವ್ರ ಪ್ರತಿರೋಧ ಮತ್ತು ನಂತರದ ರಾಜಕೀಯ ಸ್ಥಿತ್ಯಂತರಗಳಿಂದಾಗಿ ಆ ಯೋಜನೆ ನೆನೆಗುದಿಗೆ ಬಿದ್ದಿತ್ತು.
- ಕಾಂಗ್ರೆಸ್ ಸರ್ಕಾರದ ಮರುಜೀವ: ಸದ್ಯದ ಕಾಂಗ್ರೆಸ್ ಸರ್ಕಾರ ಪ್ರಮುಖವಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಗೆ ಮರುಜೀವ ನೀಡಿದ್ದಾರೆ. ಬೆಂಗಳೂರಿನ ಮೇಲಿನ ಜನಸಂಖ್ಯೆ ಮತ್ತು ಸಂಚಾರ ದಟ್ಟಣೆಯ ಒತ್ತಡವನ್ನು ಕಡಿಮೆ ಮಾಡಲು ಬಿಡದಿಯನ್ನು ಹೈಟೆಕ್ ಸಿಟಿಯನ್ನಾಗಿ ಮಾಡುವುದು ಇವರ ಉದ್ದೇಶವಾಗಿದೆ.
ಸರ್ಕಾರದ ಲ್ಯಾಂಡ್ ಪೂಲಿಂಗ್ ಸೂತ್ರ ಏನಿದು?
ಈ ಬಾರಿ ರೈತರಿಗೆ ನೇರವಾಗಿ ದುಡ್ಡು ಕೊಟ್ಟು ಜಮೀನು ಖರೀದಿಸುವ ಹಳೆಯ ಪದ್ಧತಿಯ ಬದಲಾಗಿ ಸರ್ಕಾರ ಲ್ಯಾಂಡ್ ಪೂಲಿಂಗ್ ಮಾದರಿಯನ್ನು ಜಾರಿಗೆ ತರಲು ಉದ್ದೇಶಿಸಿದೆ.
ರೈತರು ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಮುಂಗಡ ಹಣ ಪಡೆಯದೇ ಸರ್ಕಾರಕ್ಕೆ ಹಸ್ತಾಂತರಿಸಬೇಕು.
ಸರ್ಕಾರ ಆ ಇಡೀ ಪ್ರದೇಶದಲ್ಲಿ ಬೃಹತ್ ರಸ್ತೆಗಳು ಪಾರ್ಕ್ಗಳು ಒಳಚರಂಡಿ ವ್ಯವಸ್ಥೆ, ಕೈಗಾರಿಕಾ ವಲಯ ಹಾಗೂ ಐಟಿ ಪಾರ್ಕ್ಗಳಂತಹ ಆಧುನಿಕ ಮೂಲಸೌಕರ್ಯಗಳನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತದೆ.
ಇಡೀ ಲೇಔಟ್ ಅಭಿವೃದ್ಧಿಯಾದ ನಂತರ, ಒಟ್ಟು ಜಮೀನಿನ ಶೇಕಡಾ 40 ರಿಂದ 50 ರಷ್ಟು ವಿಸ್ತೀರ್ಣದ ವಾಣಿಜ್ಯ ಅಥವಾ ವಸತಿ ಸೈಟುಗಳನ್ನು ಮರಳಿ ಅದೇ ರೈತರಿಗೆ ನೀಡಲಾಗುತ್ತದೆ. ಇನ್ನುಳಿದ ಜಾಗವನ್ನು ಸರ್ಕಾರ ರಸ್ತೆಗಳು ಮತ್ತು ಸಾರ್ವಜನಿಕ ಬಳಕೆಗೆ ಇಟ್ಟುಕೊಳ್ಳುತ್ತದೆ.
ಸರ್ಕಾರದ ವಾದ: ಕೃಷಿ ಭೂಮಿಯಾಗಿರುವಾಗ ಸಿಗುವ ಬೆಲೆಗಿಂತ ಒಮ್ಮೆ ಹೈಟೆಕ್ ಟೌನ್ಶಿಪ್ ಆಗಿ ಬದಲಾದ ಮೇಲೆ ರೈತರ ಕೈಗೆ ಸಿಗುವ ಸೈಟುಗಳ ಮಾರುಕಟ್ಟೆ ಮೌಲ್ಯ ಹತ್ತು ಪಟ್ಟು ಹೆಚ್ಚಿರುತ್ತದೆ. ಇದರಿಂದ ರೈತರು ರಾತ್ರೋರಾತ್ರಿ ಕೋಟ್ಯಧಿಪತಿಗಳಾಗುತ್ತಾರೆ ಮತ್ತು ತಲೆಮಾರುಗಳವರೆಗೆ ಅವರಿಗೆ ಆಸ್ತಿ ಉಳಿಯುತ್ತದೆ ಎನ್ನುತ್ತದೆ ಸರ್ಕಾರ.
ರೈತರ ತೀವ್ರ ಆತಂಕ ಮತ್ತು ವಿರೋಧಕ್ಕೆ ಕಾರಣಗಳು

ಸರ್ಕಾರದ ಲ್ಯಾಂಡ್ ಪೂಲಿಂಗ್ ಯೋಜನೆ ಕೇಳಲು ಆಕರ್ಷಕವಾಗಿದ್ದರೂ, ಭೂಮಿ ಕಳೆದುಕೊಳ್ಳುವ ರೈತರು ಮಾತ್ರ ಇದನ್ನು ಕಡುಬಾಗಿ ವಿರೋಧಿಸುತ್ತಿದ್ದಾರೆ. ಅವರ ಆತಂಕಗಳ ಹಿಂದೆ ಬಲವಾದ ತರ್ಕವಿದೆ
ಫಲವತ್ತಾದ ರೇಷ್ಮೆ ಮತ್ತು ತೋಟಗಾರಿಕಾ ಭೂಮಿ: ಬಿಡದಿ ಹಾಗೂ ಹಾರೋಹಳ್ಳಿ ಭಾಗದ ಸುಮಾರು 25 ಹಳ್ಳಿಗಳ ಜಮೀನುಗಳು ಅತ್ಯಂತ ಫಲವತ್ತಾಗಿವೆ ಇಲ್ಲಿನ ರೈತರು ತಲೆಮಾರುಗಳಿಂದ ರೇಷ್ಮೆ ಬೆಳೆ ತೆಂಗು ಅಡಿಕೆ ಮತ್ತು ತರಕಾರಿಗಳನ್ನು ಬೆಳೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕೃಷಿಯೇ ಇವರ ಜೀವನಾಧಾರ.
ಮಧ್ಯಂತರ ಜೀವನದ ಪ್ರಶ್ನೆ: ಸರ್ಕಾರ ಭೂಮಿ ಪಡೆದು, ಅದನ್ನು ಲೇಔಟ್ ಆಗಿ ಅಭಿವೃದ್ಧಿಪಡಿಸಿಮರಳಿ ಸೈಟುಗಳನ್ನು ರೈತರ ಕೈಗೆ ನೀಡಲು ಕನಿಷ್ಠ 5 ರಿಂದ 10 ವರ್ಷಗಳ ಸಮಯ ಬೇಕಾಗುತ್ತದೆ ಈ ಮಧ್ಯಂತರ ಅವಧಿಯಲ್ಲಿ ಕೃಷಿ ಆದಾಯವಿಲ್ಲದೆ ಬಡ ರೈತರು ಕುಟುಂಬ ಸಾಕುವುದು ಹೇಗೆ ಎಂಬುದು ಅವರ ದೊಡ್ಡ ಪ್ರಶ್ನೆ.
ರಿಯಲ್ ಎಸ್ಟೇಟ್ ದಲ್ಲಾಳಿಗಳ ಹಾವಳಿ: ಯೋಜನೆ ಘೋಷಣೆಯಾಗುತ್ತಿದ್ದಂತೆ ಸ್ಥಳೀಯ ರೈತರಿಗಿಂತ ಹೊರಗಿನ ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ದಲ್ಲಾಳಿಗಳು ಸಕ್ರಿಯರಾಗುತ್ತಾರೆ. ಬಡ ಮತ್ತು ಅನಕ್ಷರಸ್ಥ ರೈತರನ್ನು ಹೆದರಿಸಿ ಅಥವಾ ಆಮಿಷ ಒಡ್ಡಿ ಅವರ ಜಮೀನುಗಳನ್ನು ಕಡಿಮೆ ಬೆಲೆಗೆ ಲಪಟಾಯಿಸುವ ದಂಧೆ ಆರಂಭವಾಗುತ್ತದೆ ಎಂಬ ಭೀತಿ ಇದೆ.
ತೆರಿಗೆ ಮತ್ತು ನಗರ ಸಂಸ್ಕೃತಿಯ ಹೊರೆ: ಗ್ರಾಮೀಣ ಭಾಗದ ಈ ಹಳ್ಳಿಗಳು ಟೌನ್ಶಿಪ್ ವ್ಯಾಪ್ತಿಗೆ ಬಂದರೆ ಕೃಷಿ ಸೊಗಡು ನಾಶವಾಗಿ ಕೈಗಾರಿಕಾ ಕಸದ ತೊಟ್ಟಿಯಾಗುತ್ತವೆ. ಜೊತೆಗೆ ಮುಂಬರುವ ಗ್ರೇಟರ್ ಬೆಂಗಳೂರು ಬಿಲ್ ಅಡಿಯಲ್ಲಿ ಇವುಗಳನ್ನು ತಂದರೆ ರೈತರ ಮೇಲೆ ಭಾರಿ ತೆರಿಗೆ ಹೊರೆ ಬೀಳುತ್ತದೆ ಎನ್ನುವುದು ಸ್ಥಳೀಯರ ದೂರು.
ರಾಜಕೀಯ ಆಯಾಮ ಮತ್ತು ಪ್ರತಿಪಕ್ಷಗಳ ಹೋರಾಟದ ತಂತ್ರ

ಬಿಡದಿ ಟೌನ್ಶಿಪ್ ವಿವಾದ ಕೇವಲ ರೈತರ ಸಮಸ್ಯೆಯಾಗಿ ಉಳಿದಿಲ್ಲ ಇದು ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡ ರಾಜಕೀಯ ಯುದ್ಧಭೂಮಿಯಾಗಿ ಬದಲಾಗಿದೆ
ಡಿ.ಕೆ. ಶಿವಕುಮಾರ್ ವರ್ಸಸ್ ಎಚ್.ಡಿ. ಕುಮಾರಸ್ವಾಮಿ: ರಾಮನಗ ಜಿಲ್ಲೆ ಸಾಂಪ್ರದಾಯಿಕವಾಗಿ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಪ್ರದೇಶವಾಗಿದ್ದು ಇಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಜೆಡಿಎಸ್ ನಡುವೆ ದಶಕಗಳ ರಾಜಕೀಯ ವೈಷಮ್ಯವಿದೆ. ಈಗ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿರುವುದರಿಂದ, ಈ ಭೂಸ್ವಾಧೀನ ವಿಷಯವನ್ನು ಇಟ್ಟುಕೊಂಡು ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿಹಾಕಲು ವಿರೋಧ ಪಕ್ಷಗಳು ತಂತ್ರ ರೂಪಿಸಿವೆ.
ಕಾಂಗ್ರೆಸ್ ಹೈಕಮಾಂಡ್ಗೆ ಹಣದ ಆರೋಪ: ಇಂದು ಪ್ರತಿಭಟನೆಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ ಸರ್ಕಾರಕ್ಕೆ ರೈತರ ಅಭಿವೃದ್ಧಿ ಬೇಕಾಗಿಲ್ಲ. ಬೆಂಗಳೂರಿನ ಸುತ್ತಮುತ್ತ ರಿಯಲ್ ಎಸ್ಟೇಟ್ ದಂಧೆ ನಡೆಸಿ, ಆ ಹಣವನ್ನು ಕಾಂಗ್ರೆಸ್ ಹೈಕಮಾಂಡ್ಗೆ ತಲುಪಿಸಲು ಈ ಯೋಜನೆ ತರಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಿಡದಿ ಸ್ಯಾಟಲೈಟ್ ಟೌನ್ಶಿಪ್ ಯೋಜನೆ ಸದ್ಯಕ್ಕೆ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಒಂದು ಕಡೆ ಬೆಂಗಳೂರಿನ ಸಾರ್ವತ್ರಿಕ ಬೆಳವಣಿಗೆಗೆ ಇಂತಹ ಉಪನಗರಗಳ ಅಗತ್ಯವಿದೆ ಎಂಬುದು ಸರ್ಕಾರದ ವಾದವಾದರೆ ಮತ್ತೊಂದೆಡೆ ಅನ್ನ ನೀಡುವ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂಬುದು ರೈತರ ಪಟ್ಟು.
ವಿರೋಧ ಪಕ್ಷಗಳು ಈಗಾಗಲೇ ಪಾದಯಾತ್ರೆಯ ಮುನ್ಸೂಚನೆ ನೀಡಿರುವುದರಿಂದ, ಮುಂಬರುವ ಜುಲೈ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯ ಭಾರಿ ಕೋಲಾಹಲ ಸೃಷ್ಟಿಸುವುದು ಖಂಡಿತ. ಸರ್ಕಾರ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಮುಂದುವರಿಸುತ್ತದೆಯೇ ಅಥವಾ ಪ್ರತಿಭಟನೆಗೆ ಮಣಿದು ಹಿಂದೆ ಸರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
